ಪ್ರಕೃತಿ ಬೆಳಗಾವಿ

*ಅಥಣಿ ಮುಸ್ಲಿಂ ಯುವಕನ ಕಿರುಕುಳಕ್ಕೆ ಹಿಂದೂ ಬಾಲಕಿ ಆತ್ಮಹತ್ಯೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮುಸ್ಲಿಂ ಯುವಕನ ನಿರಂತರ ಕಿರುಕುಳಕ್ಕೆ ಅಪ್ರಾಪ್ತ ಹಿಂದೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಿರಾಜ್ ಕಾಳೆ ಬಂಧಿತ ಆರೋಪಿ. ಹಿಂದೂ ಯುವತಿಯ ಮನೆಗೆ ಪದೇ, ಪದೇ ಬರುತ್ತಿದ್ದ ಯುವಕ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆ ಕಟ್ಟಡ ಕೆಲಸ ಮಾಡುತ್ತಿದ್ದ ಪಿರಾಜ್ ಕಾಳೆ ಎಂಬ ಯುವಕ ಮೃತ ಯುವತಿಗೆ ಪರಿಚಯವಾಗಿದ್ದ. ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇದನ್ನು ಗಮನಿಸಿದ ಮನೆಯವರು ಯುವತಿಯ ಮೊಬೈಲ್ ಕಸಿದಿದ್ದರು. ಆದರೆ ಯುವಕ ಪದೇ, ಪದೇ ಯುವತಿಯ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ‌.

ಸಧ್ಯ ಅಪ್ರಾಪ್ತ ಬಾಲಕಿಯ ಪೋಷಕರು ನೀಡಿರುವ ದೂರಿನ ಅನ್ವಯ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲವ್ ಜಿಹಾದ್ ಶಂಕೆ  ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಆದರೆ ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಕಳೆದುಕೊಂಡು ಕುಟುಂಬದವರು‌ ಕಣ್ಣೀರು ಹಾಕಿತ್ತಿದ್ದಾರೆ.********************************

Leave a Reply

Your email address will not be published. Required fields are marked *

Back to top button