ಪ್ರಕೃತಿ ಬೆಳಗಾವಿ
*ಸೈನಿಕನ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ಲೆ ಗ್ರಾಮದ ಸೈನಿಕರಾಗಿದ್ದ ನಾಯಕ್ ರಾಮಚಂದ್ರ ಮೋಹನ್ ಪಾಟೀಲ್ ಅವರ ಅಕಾಲಿಕ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ ಸೂಚಿಸಿದ್ದಾರೆ.
ಅವರ ನಿಧನ ನಮಗೆಲ್ಲರಿಗೂ ಅತ್ಯಂತ ದುಃಖ ತಂದಿದೆ. ಭಾರತ ಮಾತೆಯ ಸೇವೆಗಾಗಿ ಅವರು ಸಲ್ಲಿಸಿದ ತ್ಯಾಗ ಅನನ್ಯವಾದುದು.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಗ್ರಾಮಕ್ಕೆ ತೆರಳಿ ಅಂತಿಮ ಗೌರವ ಸಲ್ಲಿಸಿದರು.*******************************






