ಸಮಾನತೆ, ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ಪರಿಕಲ್ಪನೆಗಳನ್ನು ಅನುಸರಿಸಿಕೊಳ್ಳಬೇಕು: ಬಸವರಾಜ ಹೆಗ್ಗನಾಯಕ…!!

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಕರಡಿಗುದ್ದಿಯಿಂದ ಬೃಹತ್ ಮಾನವ ಸರಪಳಿ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮಾಜ ಹಾಗೂ ಪ್ರಜಾಪ್ರಭುತ್ವದ ಭದ್ರ ಬುನಾದಿಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ಪರಿಕಲ್ಪನೆಗಳನ್ನು ಅನುಸರಿಸಿಕೊಳ್ಳುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು ಮತ್ತು ತತ್ವಗಳನ್ನು ಅರಿಯುವುದು ಪ್ರಜಾಪ್ರಭುತ್ವ ದಿನಾಚರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ
ರವಿವಾರ (ಸೆ. 15) ಸಾಂಬ್ರಾದಲ್ಲಿ ಆಯೋಜಿಸಲಾದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ, ಅಪ್ಪಿಕೊಂಡಿರುವ ನಾಡಿನ ಜನರಿಂದ ಯಶಸ್ವಿಯಾಗಿ ಈ ಕಾರ್ಯ ನಡೆಸಲು ಯೋಜನೆ ರೂಪಿಸಲಾಗಿದೆ. ಮಾನವ ಸರಪಳಿಯು ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಸಂಕೇತವಾಗಿ ಇರಲಿದ್ದು, ಇದರಲ್ಲಿ ಭಾಗವಹಿಸುವ ಎಲ್ಲರೂ ಕೂಡಾ ಪ್ರಜಾಪ್ರಭುತ್ವ ಮೂಲ ಆಶಯಗಳ ಕುರಿತು ಸಾರ್ವಜನಿಕ ಸಂದೇಶವನ್ನು ನೀಡಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ತಾಲೂಕಿನ ಕರಡಿಗುಡ್ಡಿ ಗ್ರಾಮದಿಂದ ಮೊದಗಾ ಗ್ರಾಮದವರೆಗೆ ನಾಗರಿಕರು, ವಿವಿಧ ಯುವ ಸಂಘಟನೆ, ನಿವೃತ್ತ ಸೈನಿಕರು, ಸ್ತ್ರೀ ಶಕ್ತಿ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರ ಮೂಲಕ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿದರು.
ಎನ್.ಸಿ. ಸಿ, ಎನ್.ಎಸ್.ಎಸ್, ಸೌಟ್ಸ್ ಗೌಡ್ಸ್ ವಿದ್ಯಾರ್ಥಿಗಳು ಭಾವಕತೆಯ ಘೋಷಣೆಗಳನ್ನು ಕೂಗಿದರು. ನಿವೃತ್ತ ಸೈನಿಕರು ಹಾಗೂ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಮಾನವ ಸರಪಳಿಯಲ್ಲಿ ರಾಷ್ಟ್ರ ಪ್ರೇಮ ಮತ್ತು ಸ್ವಾತಂತ್ರ್ಯ ವೀರರ ಘೋಷಣೆಗಳ ಬಿತ್ತಿ ಪತ್ರಗಳ ಪ್ರದರ್ಶಿದರು.
ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೆಗಡೆ, ಸಹಾಯಕ ನಿರ್ದೇಶಕ ಬಿ. ಡಿ ಕಡೆಮನಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರಚನಾ ಗಾವಡೆ, ಉಪಾಧ್ಯಕ್ಷ ಮಾರುತಿ ಜೋಗಾನಿ, ಮುಂಖಡರಾದ ರಾಜು ದೇಸಾಯಿ, ಲಕ್ಷ್ಮಣ ದಂಡಾಪುರ, ದಿಶಾ ಸಮಿತಿ ಸದಸ್ಯರಾದ ಸಿದ್ದಲಿಂಗ ಸರೂರ ಸೇರಿದಂತೆ ನಾಗೇಶ ದೇಸಾಯಿ, ರವಿಕಾಂತ ಸಿ. ಎಂ, ಪ್ರಶಾಂತ ಮುನ್ನವಳ್ಳಿ, ರೇವತಿ ಶಿಂಗೆ, ವಸಂತ ಕುಮಾರ, ರಾನವ್ವ ಮಾದರ, ಗೋಪಾಲ ಗುಡಸಿ, ರಾಜೇಂದ್ರ ಮೊರಬದ, ರಮೇಶ ಹೊಗಾರ, ಅಭಿನಂದನ ಹೊಸಗೌಡರ, ಬೆಳಗಾವಿ ತಾಲೂಕಿನ ನಾಗರಿಕರು, ವಿವಿಧ ಯುವ ಸಂಘಟಣೆ, ನಿವೃತ್ತ ಸೈನಿಕರು, ಸ್ತ್ರೀ ಶಕ್ತಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಸಾಂಬ್ರಾ ಗ್ರಾಮದಲ್ಲಿ ವಿನೂತನವಾಗಿ ಭಜನೆ, ಡೊಳ್ಳು ಕುಣಿತ, ಮೆರವಣಿಗೆಯಲ್ಲಿ ವೀರಗಾಸ, ಕರಡಿ ಮುಜಲಿ ವಾದ್ಯಗಳನ್ನು ನುಡಿಸುವ ತಂಡಗಳು ಸೇರಿದಂತೆ ವಿವಿಧ ಕಲಾ ತಂಡಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.******************************