ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ

ವಾ.ಕ.ರ.ಸಾ.ಸಂಸ್ಥೆ ನೌಕರರ ಸಹಕಾರ ಸಂಘ ನಿ. ಬೆಳಗಾವಿ ವತಿಯಿಂದ ಕರ್ತವ್ಯ ನಿರತ ಹೃದಯಾಘಾತದಿಂದ ಮೃತ ಪಟ್ಟ ನೌಕರರಿಗೆ ಪರಿಹಾರ ಧನ…!!


ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘ ನಿಯಮಿತ. ಬೆಳಗಾವಿ ವತಿಯಿಂದ ಇವತ್ತು ದಿನಾಂಕ ಅಗಸ್ಟ್ 15.2024 ರಂದು. ಸಾರಿಗೆ ಸಂಸ್ಥೆಯಲ್ಲಿ ಸೇವೆಯಲ್ಲಿರುವಾಗ ಮೃತ ಪಟ್ಟ ಸಂಘದ ಸದಸ್ಯರಾದ ದಿವಂಗತ ಶ್ರೀ ಸುಭಾಷ್ ವಾಯ್. ಜಕರಡ್ಡಿ ಸಂಚಾರ ನಿಯಂತ್ರಕರು ಗೋಕಾಕ್ ಘಟಕ ಹಾಗೂ ದಿಶ್ರೀ. ಮುಗಪ್ಪಾ ಶಿವಪುತ್ರಪ್ಪ ಸಂಗೊಳ್ಳಿ ಚಾಲಕ ಕಂ ನಿರ್ವಾಹಕ ಸವದತ್ತಿ ಘಟಕ. ಇವರ ಅವಲಂಬಿತರಿಗೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಪಿ ಶಿಗಿಹಳ್ಳಿ ಇವರು 78 ನೆ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಸಂಘದ ವತಿಯಿಂದ ತಲಾ ರೂ 50.000/- ರಂತೆ ಮರಣ ಪರಿಹಾರ ಧನ ವಿತರಿಸಿದರು.

ಈ ಸಂದರ್ಬದಲ್ಲಿ ಸಂಘದ ಆಡಳಿತ ನಿರ್ದೇಶಕರು ಶ್ರೀ ಎಸ್ ಬಡಿಗೇರ . ಮಲ್ಲಿಕಾರ್ಜುನ್ ಸಜ್ಜನ್ ಸುಜಾತ ಚಂಬಾರ ಶ್ರೀ ಎಂ ಜಿ ದಿನ್ನಿಮನಿ ಶ್ರೀ ಸುರೇಶ್ ವಕ್ಕುಂದ ಶ್ರೀ ಬೀ ವಿ ಲಗಳಿ ಶ್ರೀ ಕೆ ಎಚ್ಚ್ ಮುಲ್ತಾನಿ ಶ್ರೀ ಎ ಏನ್ ಗುಡದಿ ಹಾಗೂ ಕಾನೂನು ಸಲಹೆಗಾರರಾದ ಶ್ರೀ ಡಿ ಎಸ್ ದೇವರಮನಿ ಹಾಗೂ ಗಿರೀಶ್ ಕಾಂಬಳೆ ಕಾರ್ಯದರ್ಶಿ ರಾಘವೇಂದ್ರ ಕಾನಗು. ಲೆಕ್ಕಿಗರಾದ ಶ್ರೀ ದೀಪಕ್ ದೇಶಪಾಂಡೆ ಸಹಾಯಕ ಸಿಬ್ಬಂದಿ ಶೀತಲ್ ಹಜಾರೆ ಎಸ್ ಬಿ ವಾಲಿಕಾರ ಎಸ್ ಎಂ ಪಾಟೀಲ್ ಬಾಬು ಹುಲಕುಂದ ಉಪಸ್ಥಿತರಿದ್ದರು.**************************

Back to top button